4-2-2015 ರಂದು ನಡೆದ ಶಾಲಾ ಮಟ್ಟದ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿದ ಭಾರತಿ ಟೀಚರ್ ಗಣಿತ ನಮ್ಮ ಜೀವನದ ಒಂದು ಭಾಗವೆಂದು ಅಭಿಪ್ರಾಯಪಟ್ಟರು.ಈ ಮೇಳದಲ್ಲಿ PTA ಅಧ್ಯಕ್ಷರು,ರಕ್ಷಕರು,ಮಕ್ಕಳು ಬಹಳ ಆಸಕ್ತಿಯಿಂದ ಭಾಗವಹಿಸಿದರು.ಕಾರ್ಯಕ್ರಮದ ಆರಂಬದಲ್ಲಿ ರಾಮು ಮಾಸ್ತರ ಸ್ವರಚಿತ ಮೇಳ ಗೀತೆಯನ್ನು ಹಾಡಿಸಲಾಯಿತು .
ಮೇಳ ಗೀತೆ
ಬನ್ನಿ ಗೆಳೆಯರೇ
ಸಿಡಿಲ ಮರಿಗಳೇ
ಗಣಿತ ಮೇಳ ಸೇರುವ
ಕೂಡಿ ಲೆಕ್ಕ ಮಾಡುವ .
ಪುಟ್ಟ ಪುಟ್ಟ ಹೆಜ್ಜೆಯಿಟ್ಟು
ಮುಂದೆ ನಡೆಯುವ.
ಗೇಣಿಗೊಂದು ಗೇಣುಯಿಟ್ಟು
ಎಣಿಸಿ ನೋಡುವ .
ನಿಮಿಷ ನಿಮಿಷ ಒಟ್ಟು ಸೇರಿ
ಗಂಟೆಯಾಯಿತು .
ದಿನಕೆ ದಿನವು ಕಳೆದು
ಮುಂದೆ ವರ್ಷವಾಯಿತು .
ಚಮಚ ಗ್ಲಾಸಿನಲ್ಲಿ ನೀರ
ಅಳೆದು ನೋಡುವ
ಹನಿಯ ಗೂಡಿ ಹಳ್ಳವೆಂಬ
ಗಾದೆ ತಿಳಿಯುವಾ.
ಉದ್ದ ಮೂಗು ಕೈಯ್ಯ ಬೆರಳು
ಅಳೆದು ನೋಡುವ .
ಮೀಟರ್ ಕೋಲು ಇಂಚು ಎಂಬ
ಅಳತೆ ತಿಳಿಯುವ.
ಇಡ್ಲಿ ದೋಸೆ ಚಕ್ಕುಲಿಯೆಲ್ಲ
ಎಣಿಕೆಯಲ್ಲವೇ...?
ದಿನವು ತಿಂದು ಮುಗಿಯುವಂತಹ
ಲೆಕ್ಕವಲ್ಲವೇ... ?
ಗಣಿತವೆಂದು ಮುಗಿಯುವಂತಹ
ಲೆಕ್ಕವಲ್ಲವೇ... ?
ಗಣಿತವೆಂದು ಕಷ್ಟವಲ್ಲ
ನಮ್ಮ ಬಾಳಿಗೆ
ಕೂಡಿ ಕಳೆದು ಉಳಿದವೆಲ್ಲ
ನಮ್ಮ ನಾಡಿಗೆ .